#ಮನದಾಳ
ಕಡಲಲೆಗಳಂತೆ ಬಂದು
ಗದ್ದಲವೆಬ್ಬಿಸಿ ಹೋಗುವ ನೆನಪುಗಳು;
ದಡದಂತೆ ಎದೆಯೊಳಗೂ ತತ್ತರ,
ಸಿಗುತ್ತಿಲ್ಲ ಕಳೆದು ಹೋದವುಗಳಿಗುತ್ತರ.
ಅದೆಷ್ಟು ಕನಸುಗಳ ಕೊಂದು
ನಿರುಮ್ಮಳನಾಗ ಹೊರಟೆನೋ?
ಅದಷ್ಟೂ ನಿರಾಳತೆಯ ಬದಲು
ವಿರಹಗಳನ್ನೇ ಸಮ್ಮಾನಿಸಿದೆ.
ಕೆಲವೊಂದೆಡೆ ಕೈ ಹಾಕಿ
ಸುಟ್ಟುಕೊಂಡದ್ದೂ ಪಾಠವೇ;
ಅನುಭವಕ್ಕಿಂತ ಮಿಗಿಲಾದ ಗುರುವೆಲ್ಲಿ?
ಹಾಗಾಗಿ ನಾನೀಗ ಚೂರು ನಿಪುಣ,
ಹೆಜ್ಜೆಗಳ ಇಡುವಾಗ ಮೊದಲಿಗಿಂತ ಜಾಗರೂಕ.
ಗೂಡೊಳಗೆ ಕೂಡಿಟ್ಟ ಆಸೆಗಳಿಗೆಲ್ಲ
ಮರಳಿ ರೆಕ್ಕೆ ಬಿಚ್ಚಿ ಹಾರಲು ಕಾತರ;
ಇವನ್ನೆಲ್ಲ ಕೊಂದು ಹಂತಕನಾಗಲಾರೆ,
ಪೋಷಿಸಿ ಸಲಹಿ ಪಸಲು ತೆಗೆವೆ
ಅನವರತ ತುಡಿತ
ಏನಾದರೂ ಮಾಡಬೇಕೀಗ;
ಜಡವಾಗಿರುವುದು
ನನ್ನ ಜಾಯಮಾನವಲ್ಲವಲ್ಲ.
ಮತ್ತದೇ ಕುಳಿತು ಲೆಕ್ಕಾಚಾರದಲಿ ತೊಡಗಿರುವೆ,
ಅಳೆದು, ತೂಗಿ ಸರಿಯಾದ ಹಾದಿಯಲೇ
ಮುನ್ನಡೆದುಬಿಡಬೇಕು
ಇನ್ನೆಲ್ಲೂ ಎಡವದಂತೆ;
ನಂಜುಣ್ಣುವ ಯಾರ ನಾಲಗೆಗೂ
ಕುಹಕದ ವಸ್ತುವಾಗದಂತೆ!
#ಸಾಹುಕಾರ
ಕಡಲಲೆಗಳಂತೆ ಬಂದು
ಗದ್ದಲವೆಬ್ಬಿಸಿ ಹೋಗುವ ನೆನಪುಗಳು;
ದಡದಂತೆ ಎದೆಯೊಳಗೂ ತತ್ತರ,
ಸಿಗುತ್ತಿಲ್ಲ ಕಳೆದು ಹೋದವುಗಳಿಗುತ್ತರ.
ಅದೆಷ್ಟು ಕನಸುಗಳ ಕೊಂದು
ನಿರುಮ್ಮಳನಾಗ ಹೊರಟೆನೋ?
ಅದಷ್ಟೂ ನಿರಾಳತೆಯ ಬದಲು
ವಿರಹಗಳನ್ನೇ ಸಮ್ಮಾನಿಸಿದೆ.
ಕೆಲವೊಂದೆಡೆ ಕೈ ಹಾಕಿ
ಸುಟ್ಟುಕೊಂಡದ್ದೂ ಪಾಠವೇ;
ಅನುಭವಕ್ಕಿಂತ ಮಿಗಿಲಾದ ಗುರುವೆಲ್ಲಿ?
ಹಾಗಾಗಿ ನಾನೀಗ ಚೂರು ನಿಪುಣ,
ಹೆಜ್ಜೆಗಳ ಇಡುವಾಗ ಮೊದಲಿಗಿಂತ ಜಾಗರೂಕ.
ಗೂಡೊಳಗೆ ಕೂಡಿಟ್ಟ ಆಸೆಗಳಿಗೆಲ್ಲ
ಮರಳಿ ರೆಕ್ಕೆ ಬಿಚ್ಚಿ ಹಾರಲು ಕಾತರ;
ಇವನ್ನೆಲ್ಲ ಕೊಂದು ಹಂತಕನಾಗಲಾರೆ,
ಪೋಷಿಸಿ ಸಲಹಿ ಪಸಲು ತೆಗೆವೆ
ಅನವರತ ತುಡಿತ
ಏನಾದರೂ ಮಾಡಬೇಕೀಗ;
ಜಡವಾಗಿರುವುದು
ನನ್ನ ಜಾಯಮಾನವಲ್ಲವಲ್ಲ.
ಮತ್ತದೇ ಕುಳಿತು ಲೆಕ್ಕಾಚಾರದಲಿ ತೊಡಗಿರುವೆ,
ಅಳೆದು, ತೂಗಿ ಸರಿಯಾದ ಹಾದಿಯಲೇ
ಮುನ್ನಡೆದುಬಿಡಬೇಕು
ಇನ್ನೆಲ್ಲೂ ಎಡವದಂತೆ;
ನಂಜುಣ್ಣುವ ಯಾರ ನಾಲಗೆಗೂ
ಕುಹಕದ ವಸ್ತುವಾಗದಂತೆ!
#ಸಾಹುಕಾರ